Headlines

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ!

ಜಾಹೀರಾತಿನಲ್ಲೇ “ಬೆಳಗಾವಿ ಮಹಾರಾಷ್ಟ್ರ” — ಕೊಲ್ಹಾಪುರ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಗಡಿಭಾಗದಲ್ಲಿ ಕಿಡಿ. ಬೆಳಗಾವಿಕನ್ನಡಿಗರ ಹಕ್ಕು–ಗೌರವದ ನೆಲೆಯಾದ ಗಡಿಭಾಗ ಮತ್ತೆ ಒಂದು ನಿರ್ಲಕ್ಷ್ಯ ಬರಹದಿಂದ ದಹನಗೊಂಡಿದೆ. ಖ್ಯಾತ ಗಾಯಕ ಮಹೇಶ್ ಕಾಳೆ ಅವರ ಡಿಸೆಂಬರ್ 5ರ ಗಾಯನ ಕಾರ್ಯಕ್ರಮಕ್ಕಾಗಿ ಕೊಲ್ಹಾಪುರದ ಏಕದಂತಾ ರಂಗಭೂಮಿ ಸಂಸ್ಥೆ ಪ್ರಕಟಿಸಿದ ಸಾಮಾಜಿಕ ಮಾಧ್ಯಮ ಜಾಹೀರಾತಿನಲ್ಲಿ“Belagavi, Maharashtra”ಎಂಬ ಪದಬಳಕೆ ಕಂಡುಬಂದಿದೆ.ಈ ಒಂದು ಸಾಲಿನ ದುರದೃಷ್ಟದ ತಪ್ಪೇ ಕನ್ನಡಿಗರ ಸ್ವಾಭಿಮಾನಕ್ಕೆ ನೇರ ಧಕ್ಕೆ ತಂದುಕೊಟ್ಟಿರುವುದಾಗಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. “ಬೆಳಗಾವಿ ಮಹಾರಾಷ್ಟ್ರ?” — ಕನ್ನಡ…

Read More

19 ತಿಂಗಳಾದರೂ ದೋಷಾರೋಪ ಪಟ್ಟಿ ಇಲ್ಲ!

ಬಾಳೇಕುಂದ್ರಿ ಕೆ.ಎಚ್‌ನಲ್ಲಿ ‘ನಕಲಿ ದಾಖಲೆ’ ದಂಧೆ!ಒಂದೇ ಗಲ್ಲಿಗೆ ಮೂರು ಯೋಜನೆ—ಕೋಟ್ಯಾಂತರ ಲೂಟಿ?. ಬೆಳಗಾವಿ:ತಾಲೂಕಿನ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ—ಒಂದೇ ಗಲ್ಲಿಗೆ ಮೂರೂ ಬಾರಿ ಯೋಜನೆ ತೋರಿಸಿ, ನಕಲಿ ದಾಖಲೆಗಳ ಮೂಲಕ ಅನುದಾನ ಲೂಟಿ ಮಾಡಿದ ಅಕ್ರಮ ಜಾಲ ಮಾಹಿತಿ ಹಕ್ಕಿನಡಿ ಬಯಲಾಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶ ಜ್ವಾಲೆ ಎದ್ದಿದೆ. ಪೊಲೀಸರು 2023 ಜೂನ್‌ನಲ್ಲಿ ಎಫ್ಐಆರ್ ದಾಖಲಿಸಿದರೂ, 19 ತಿಂಗಳಾದರೂ ಚಾರ್ಜ್‌ಶೀಟ್ ಸಲ್ಲಿಸದಿರುವುದು, ಈ ಪ್ರಕರಣವನ್ನು ಯಾರು ಕಾಪಾಡುತ್ತಿದ್ದಾರೆ ಎಂಬ ಭಾರೀ ಅನುಮಾನಕ್ಕೆ ಕಾರಣವಾಗಿದೆ.ಒಂದೇ ಗಲ್ಲಿಗೆ ಮೂರು ಯೋಜನೆ!ಮೂರು ಹೆಸರಿನಲ್ಲಿ ಮೂರೂ…

Read More

ಅಧಿವೇಶನ ವೇಳೆಗೆ ಪತ್ರಿಕಾ ಭವನ ಲೋಕಾರ್ಪಣೆ: ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಪತ್ರಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸನ್ಮಾನ ಬೆಳಗಾವಿ, ಬಹುದಿನಗಳ ಬೇಡಿಕೆಯಂತೆ ಬೆಳಗಾವಿ ನಗರದಲ್ಲಿ ಸುಸಜ್ಜಿತ ಪತ್ರಿಕಾಭವನ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 9.9 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ಚಳಿಗಾಲ ಅಧಿವೇಶನದ ವೇಳೆಗೆ ಭವನನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ನಗರದ ವಾರ್ತಾ ಭವನದಲ್ಲಿ ಮಂಗಳವಾರ (ನ.25) ನಡೆದ ಸಮಾರಂಭದಲ್ಲಿ ಪತ್ರಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪತ್ರಿಕಾಭವನ ನಿರ್ಮಾಣಕ್ಕೆ ದಶಕಗಳಿಂದ ಪ್ರಯತ್ನ ನಡೆದರೂ…

Read More

2028 ಕ್ಕೆ ನಾನೇ ಸಿಎಂ..!

2028ಕ್ಕೆ ಸಿಎಂ ಆಗುವ ಸಂಕೇತ: “ಸಮಯ ಬರಲಿ — ಆಗೋಣ!”🔹 ಬಿಜೆಪಿಯಲ್ಲಿ ಹಿರಿಯ ನಾಯಕತ್ವ: “ನಾನು–ಅಶೋಕ ಇಬ್ಬರೇ ಸೀನಿಯರ್‌ಗಳು”🔹 ಏಳು ಬಾರಿ ಗೆದ್ದಿರುವ ಗೋಕಾಕದ ಬಲಿಷ್ಠ: “ಉಳಿದವರು ಕಿರಿಯರು”🔹 ಮಾಧ್ಯಮಕ್ಕೆ ನೇರ ಸಂದೇಶ: “ಸಿಎಂ ಆಗ್ತೀನಿ ಅಂತಾ ಹೇಳಿದ್ರೆ ಆಗೋದಿಲ್ಲ” ಬೆಳಗಾವಿ:ರಾಜ್ಯದ ಮುಂದಿನ ನಾಯಕತ್ವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿರುವ ನಡುವೆಯೇ, ಮಾಜಿ ಸಚಿವ ಮತ್ತು ಗೋಕಾಕದ ಬಲಾಢ್ಯ ಶಾಸಕ ರಮೇಶ್ ಜಾರಕಿಹೊಳಿ ತಾವು ಮುಖ್ಯಮಂತ್ರಿಯಾಗುವ ಸಾಧ್ಯತೆ ಕುರಿತು ಸ್ಪಷ್ಟ ಸುಳಿವು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ರಾಜ್ಯದ…

Read More

ಡಿಕೆಶಿ ‘ನಂಬರ ಗೇಮ್’ ದಲ್ಲಿ ವೀಕ್

ಡಿಕೆಶಿ ನಂಬರ್ ಗೇಮ್‌ನಲ್ಲಿ ವೀಕ್ — ಜಾರಕಿಹೊಳಿ🔹 50 ಮಂದಿ ತೋರಿಸಿದರೆ ‘ಇವತ್ತೇ ಸಿಎಂ ಮಾಡ್ತೀವಿ’ ಎಂಬ ಚವಣಿಕೆ🔹 ಸಮ್ಮಿಶ್ರ ಸರ್ಕಾರ ಪತನಕ್ಕೆ ಡಿಕೆಶಿ ಕಾರಣ ಎಂಬ ತೀವ್ರ ಆರೋಪ ಬೆಳಗಾವಿ ರಾಜಕೀಯ ಹಸ್ತಕ್ಷೇಪವೇ ಕಾರಣ🔹 “ನಾನು ಜೀವನದಲ್ಲಿ ಡಿಕೆಶಿ ನಾಯಕತ್ವ ಒಪ್ಪುವುದಿಲ್ಲ” — ಸ್ಪಷ್ಟ ಸಂದೇಶ . ಬೆಳಗಾವಿ:ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಸಂಖ್ಯಾಬಲದ ಬಗ್ಗೆ ಪುನಃ ಪ್ರಶ್ನೆಗಳು ಎದ್ದಿರುವ ನಡುವೆಯೇ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ನೇರ ರಾಜಕೀಯ ಬಾಣ ಹಾರಿಸಿದರು.“ಡಿಕೆಶಿ 50 ಶಾಸಕರ…

Read More

ಸರ್ಕಾರ ಯಾರೊಬ್ಬರ ಶ್ರಮದಿಂದ ಬಂದಿಲ್ಲ

ಇದು ಒಟ್ಟಾರೆ ಹೋರಾಟದ ಫಲ” — ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೂರಾರು ನಾಯಕರು, ಸಾವಿರಾರು ಕಾರ್ಯಕರ್ತರ ಪರಿಶ್ರಮ ಕಾರಣ. ಇದೊಂದು ವ್ಯಕ್ತಿಯ ಸಾಧನೆ ಎಂದು ಹೇಳುವುದು ವಾಸ್ತವವಲ್ಲ, ನಾನು ಒಪ್ಪುವುದಿಲ್ಲ,” ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು,ವಿಭಿನ್ನ ಹುದ್ದೆಗಳಲ್ಲಿ, ಎಲ್ಲೆಡೆ, ಅನೇಕರು ಜಂಟಿಯಾಗಿ ಕೆಲಸ ಮಾಡಿದ ಕಾರಣವೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಒಂದೇ ವ್ಯಕ್ತಿ ಸರ್ಕಾರ ತಂದಿದ್ದಾರೆ ಎನ್ನುವ ಮಾತು…

Read More

ಮನೆ ಬಾಗಿಲಿಗೆ ಶಾಸಕ”:

ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲರ ಮಹಾ ಜನಸಂಪರ್ಕ ಯಾತ್ರೆ – ಮತಕ್ಷೇತ್ರ ರಾಜಕೀಯಕ್ಕೆ ಹೊಸ ಮಾದರಿ e belagavi ಬೆಳಗಾವಿ:ಚುನಾವಣೆಯ ವೇಳೆ ಮಾತ್ರ ಮತ ಕೇಳಲು ಬರುವ ಪ್ರತಿನಿಧಿಗಳು, ನಂತರ ಐದು ವರ್ಷಗಳು ಕಾಣಿಸದೇ ಹೋಗುವ ಪದ್ಧತಿ — ಜನರು ಮನಸ್ಸಿನಾಳದಲ್ಲಿ ಇಟ್ಟುಕೊಂಡಿದ್ದ ಬೇಸರ. ಆದರೆ ಬೆಳಗಾವಿ ದಕ್ಷಿಣದ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಈ ರೂಢಿಗೆ ಸಂಪೂರ್ಣ ವಿರಾಮ ಹಾಕುವ ದೊಡ್ಡ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಮತಕ್ಷೇತ್ರದ 52 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವೈಯಕ್ತಿಕ ಭೇಟಿ ನೀಡುವ…

Read More

ಕಾಲ್‌ಸೆಂಟರ್ ವಂಚನೆ ಪ್ರಕರಣದಲ್ಲಿ ಖಾಕಿ ಹವಾಲಾ ಆಟ!?

ಪೊಲೀಸ್‌ ವಿರುದ್ಧವೇ ಗಂಭೀರ ಆರೋಪ ಬೆಳಗಾವಿ:ವಿದೇಶಿಗರನ್ನು ಟಾರ್ಗೆಟ್ ಮಾಡಿ ನಡೆದ ದೊಡ್ಡ ಮಟ್ಟದ ಕಾಲ್‌ಸೆಂಟರ್ ವಂಚನೆ ಪ್ರಕರಣದಲ್ಲಿ ಈಗ ಖಾಕಿ ವಲಯವೇ ನುಂಗುವಷ್ಟು ಬೆಂಕಿ ಹತ್ತಿಕೊಂಡಿದೆ! ಬೆಳಗಾವಿ ಪೊಲೀಸ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂಟರ್ಪೋಲ್‌ ಜೊತೆ ನೇರ ಸಂಪರ್ಕ ಬೆಳೆಸಿರುವುದು ಹೊಸ ತಿರುವು ಪಡೆಯುತ್ತಿದೆ. ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಈ ವಿಷಯದಲ್ಲಿ ಕೆಲ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ., ಮುಖ್ಯವಾಗಿ ಈ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ವಿಶ್ವಾಸಾರ್ಹ ಮೂಲಗಳು ಹೇಳುತ್ತಿವೆ. ಕಾಲ್‌ಸೆಂಟರ್…

Read More

ದಾಂಡೇಲಿಯವನನ್ನ ಬಿಟ್ಟಿದ್ದೇಕೆ?

ವಿದೇಶಿಗರಿಗೆ ವಂಚನೆ ಮಾಡಿದ ಪ್ರಕರಣ. ಎಲ್ಲರನ್ನೂ‌ಅರೆಸ್ಟ್ ಮಾಡಿ ದಾಂಡೇಲಿ ಮೂಲದ ವ್ಯಕ್ತಿಯನ್ನು ಬಿಟ್ಟು ಕಳಿಸಿದ್ರಾ ಪೊಲೀಸರು? ದಾಂಡೇಲಿ ವ್ಯಕ್ತಿ ಅಲ್ಲಲ್ಲಿ ರೆಸಾರ್ಟ್ ಹೊಂದಿದ್ದಾನೆಂಬ ಮಾಹಿತಿ. ಈತನಿಗೂ ಈ ವಂಚನೆ ಪ್ರಕರಣಕ್ಕೂ ಲಿಂಕ್ ಇದೆ ಎನ್ನುವ ಪ್ರಾಥಮಿಕ ಮಾಹಿತಿ. ಬೆಳಗಾವಿ. ವಿದೇಶಿಗರಿಗೆ ಕಾಲ್ ಸೆಂಟರ್ ಮೂಲಕ ವಂಚನೆ ಪ್ರಕರಣವನ್ನು‌ ಬೇಧಿಸಿದ ಬೆಳಗಾವಿ ಪೊಲೀಸರು ದಾಂಡೇಲಿ ಮೂಲದ ಆ ಪ್ರಭಾವಿ ವ್ಯಕ್ತಿಯನ್ನು ಯಾಕೆ ಬಿಟ್ಟರು ಎನ್ನುವ ಚರ್ಚೆ ಜೋರಾಗಿ ನಡೆದಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಈ ವಂಚನೆ ಪ್ರಕರಣದಲ್ಲಿ…

Read More

ಕಲಾಮಂದಿರ ಮಳಿಗೆ ಹಂಚಿಕೆ ಏಕಿಲ್ಲ? ಶೆಟ್ಟರ್ ಕಳವಳ

ಸ್ಮಾರ್ಟ್ ಸಿಟಿ ಮಿಶನ್ ಮತ್ತು ಪ್ರವಾಸೋದ್ಯಮ ಅಧಿಕಾರಿಗಳೊಂದಿಗೆ ಸಂಸದ ಜಗದೀಶ ಶೆಟ್ಟರ್ ಸಭೆ. ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ ಬೆಳಗಾವಿ ಸ್ಮಾರ್ಟ ಸಿಟಿ ಮಿಷನ್ ಯೋಜನೆಯಡಿ ಹಾಗೂ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಕೇಂದ್ರ ಸರಕಾರದ ಯೋಜನೆಯಲ್ಲಿ ಕೈಕೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.ಬೆಳಗಾವಿ ಸ್ಮಾರ್ಟ ಸಿಟಿ ಮಿಶನ್:ಪ್ರಥಮವಾಗಿ ಸ್ಮಾರ್ಟ್ ಸಿಟಿ ಮಿಶನ್ ಯೋಜನೆಯ ಅನುದಾನದಲ್ಲಿ ಬೆಳಗಾವಿ ನಗರದಲ್ಲಿ ಇದುವರೆಗೆ ನಡೆದ ವಿವಿಧ ಕಾಮಗಾರಿಗಳ ಪ್ರಗತಿಯ ಬಗ್ಗೆ…

Read More
error: Content is protected !!