Headlines

ಕತ್ತಿ ವಿವಾದದ ‘ಬಾಯಿ ಬಾಂಬ್’!

ಕತ್ತಿ ವಿವಾದದ ‘ಬಾಯಿ ಬಾಂಬ್’! ಬೆಳಗಾವಿಮಾಜಿ ಸಂಸದ ರಮೇಶ ಕತ್ತಿ ಮತ್ತೆ ರಾಜಕೀಯದ ಬಿಸಿ ಕೇಂದ್ರಬಿಂದುವಾಗಿದ್ದಾರೆ!ಅವರ ನಾಲಿಗೆಯಿಂದ ಜಾರಿ ಬಂದ ಮಾತುಗಳು — ಮತ್ತೆ ವಿವಾದದ ಚಂಡಮಾರುತ ಎಬ್ಬಿಸಿವೆ.ಈ ಬಾರಿ ಕತ್ತಿ ಅವರ ಮಾತು ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಎಂದು ಆರೋಪಗೊಂಡಿದೆ.ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಾಲ್ಮೀಕಿ ಸಂಘಟನೆಗಳು ಬೀದಿಗಿಳಿದಿವೆ.ಬೆಳಗಾವಿ, ಗೋಕಾಕ, ಹುಕ್ಕೇರಿ ಸೇರಿದಂತೆ ಅನೇಕ ಕಡೆ ಬೃಹತ್ ಪ್ರತಿಭಟನೆಗಳು,“ಕತ್ತಿ ಬಂಧನ!”ದ ಘೋಷಣೆಗಳು, ಹಾಗೂ ಕಾನೂನು ಕ್ರಮದ ಒತ್ತಡ ಹೆಚ್ಚುತ್ತಿವೆ. ಪೊಲೀಸರು ಈಗಾಗಲೇ…

Read More

ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’,

🗳️ **ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ — ನಡೆಯದ ಕತ್ತಿಯ ‘ಲಿಂಗಾಯತ ಅಸ್ತ್ರ’, ಗೆದ್ದ ಜಾರಕಿಹೊಳಿ ಬಣದ ನಿಷ್ಠೆ!** ಅಹಂಕಾರ ಮಣ್ಣಿನಡಿಯಲ್ಲಿ, ಶಾಂತ ಬಣದ ಗೆಲುವು; ಮತದಾರರು ಜಾತಿಗಿಂತ ಕೆಲಸಕ್ಕೆ ಮೌಲ್ಯ ನೀಡಿದರು. (E belagavi Special) ಬೆಳಗಾವಿಬೆಳಗಾವಿ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆ ಸಣ್ಣದಾದ ಹೋರಾಟವಾಗಿದ್ದರೂ, ಅದರ ಪ್ರತಿಧ್ವನಿ ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಮೊಳಗಿದೆ.ಈ ಚುನಾವಣೆಯಲ್ಲಿ ರಮೇಶ್ ಕತ್ತಿ ಪ್ರಯೋಗಿಸಿದ “ಲಿಂಗಾಯತ ಅಸ್ತ್ರ” ವಿಫಲವಾಗಿ ಜಾರಕಿಹೊಳಿ ಬಣದ ಶಾಂತ ಶಕ್ತಿ…

Read More

BDCC- ಗೆದ್ದ ಜಾರಕಿಹೊಳಿ. ಸೋತ ಕತ್ತಿ

ಬೆಳಗಾವಿ. ಬಿಡಿಸಿಸಿ ಚುನಾವಣೆಯಲ್ಲಿ ಜಾರಕಿಹೊಳಿ ವಿರುದ್ಧ ಮೀಸೆ ತಿರುವಿ ಉದ್ದುದ್ದ ಮಾತಾಡಿದ್ದ ಮಾಜಿ ಸಂಸದ ರಮೇಶ ಕತ್ತಿ ಬಣ ಸೋಲು ಅನುಭವಿಸಿದರೆ, ಜಾರಕಿಹೊಳಿ ಬಣ ಭರ್ಜರಿ ಗೆಲುವು ಸಾಧಿಸಿದೆ. ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಗೆದ್ದ ನಂತರ ಬಿಡಿಸಿಸಿ ಗೆದ್ದೇ ಬಿಟ್ಟೆವು ಎನ್ನುವಂತೆ ಬೀಗುತ್ತಿದ್ದ ಕತ್ತಿ ಬಣ ಸೋಲುವ ಮೂಲಕ ಮುಖಭಂಗ ಅನುಭವಿಸುವಂತಾಯಿತು. ಒಟ್ಟು 16 ಸ್ಥಾನಗಳಲ್ಲಿ ಜಾರಕಿಹೊಳಿ ಬಣ 12 ಸ್ಥಾನ ಗಳನ್ನು ತನ್ನದಾಗಿಸಿಕೊಂಡಿದೆ. ಫಲಿತಾಂಶಕ್ಕೂ ಮುನ್ನವೇ ಬಾಲಚಂದ್ರ ಜಾರಕಿಹೊಳಿ ಅವರು‌12 ಸ್ಥಾನವನ್ನು…

Read More

ಬೆಂಗಳೂರು–ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು ಶೀಘ್ರದಲ್ಲೇ- ಜೋಶಿ

ಬೆಂಗಳೂರು–ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು ಶೀಘ್ರದಲ್ಲೇ— ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಣೆ ನವದೆಹಲಿ, ಕರ್ನಾಟಕದ ಜನರ ದೀರ್ಘಕಾಲದ ಬೇಡಿಕೆಯಾದ ಬೆಂಗಳೂರು–ಮುಂಬೈ ನಡುವೆ ಮತ್ತೊಂದು ನೇರ ಸೂಪರ್ ಫಾಸ್ಟ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದ್ದಾರೆ.ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಚಲಿಸಲಿದ್ದು, ರಾಜ್ಯದ ಮಧ್ಯಭಾಗದ ಜನರಿಗೆ ನೇರವಾಗಿ ವಾಣಿಜ್ಯ ನಗರಿ ಮುಂಬೈ ಸಂಪರ್ಕ ಕಲ್ಪಿಸುವಂತಾಗಿದೆ. ಜೋಶಿ ಅವರು ನವದೆಹಲಿಯಲ್ಲಿ ರೈಲ್ವೆ ಸಚಿವ…

Read More

ಶುಭಂ ಅರೆಸ್ಟ್..!?

ಬೆಳಗಾವಿ. ಹಳೆಯ ಪ್ರಕರಣದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ‌ ಘೋಷಿತ ನಾಯಕ ಶುಭಂ ಶೆಳಕೆಯನ್ನು ಮಾಳಮಾರುತಿ ಪೊಲೀಸರು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಶೆಳಕೆ ಅವರಿಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸರು ಶೆಳಕೆಯನ್ನು ವಶಕ್ಕೆ ಪಡೆದರು. ಅಷ್ಟೆ ಅಲ್ಲ ಇತ್ತೀಚಿಗೆ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಉದ್ಧಟತನದ ಕೆಲಸ ಮಾಡಿದ ಆರೋಪವೂ ಎಂಇಎಸ್ ನ ಶುಭಂ ಶೆಳಕೆ ಮೇಲಿತ್ತು.. . ಇತ್ತೀಚೆಗಷ್ಟೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು…

Read More

ಹುಕ್ಕೇರಿ ತಾಲೂಕು ಮತಕ್ಷೇತ್ರದ ಚುನಾವಣೆ ಮುಂದೂಡಿಕೆ

ಬೆಳಗಾವಿ,ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿ ಸಾಮಾನ್ಯ ಚುನಾವಣೆಯನ್ನು ದಿನಾಂಕ 19 ಅಕ್ಟೋಬರ್ 2025 ರಂದು ನಡೆಸಲು ನಿಗದಿಯಾಗಿದ್ದರೂ, ಹುಕ್ಕೇರಿ ತಾಲೂಕು ವ್ಯಾಪ್ತಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಪ್ರತಿನಿಧಿ ಮತಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ 107692/2025 ಪ್ರಕರಣದಲ್ಲಿ, ನ್ಯಾಯಾಲಯವು ಅಕ್ಟೋಬರ್ 17, 2025 ರಂದು ಮಧ್ಯಂತರ ಆದೇಶ ಹೊರಡಿಸಿದ್ದು, ಅದರ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ…

Read More

ಮಾಹಿತಿ ಆಯೋಗದ ರಾಜ್ಯ ಆಯುಕ್ತರಾಗಿ ಹಿರಿಯ ಪತ್ರಕರ್ತ ವಾಳ್ವೇಕರ

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಿರಿಯ ಪತ್ರಕರ್ತ, ಪ್ರಸ್ತುತ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ ನೇಮಕಗೊಂಡಿದ್ದಾರೆ. ಕಳೆದ ೨೪ ವರ್ಷಗಳಿಂದ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಡಾ.ಮಹೇಶ ವಾಳ್ವೇಕರ್ ಕಳೆದ ೪ ವರ್ಷ ೯ ತಿಂಗಳಿನಿಂದ , ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ…

Read More

ಅಂತಹ ಮಾತುಗಳಿಗೆ ಜಿಎಸ್ಟಿ ಇಲ್ಲ..-ಸತೀಶ್

ರೆಸಾರ್ಟ್ ರಾಜಕೀಯ  ಹೊಸದೇನಲ್ಲ!” — ಸತೀಶ್ ಜಾರಕಿಹೊಳಿ ಎಲ್ಲ ಚುನಾವಣೆಗಳಿಗೂ ‘ರೆಸಾರ್ಟ್ ರೂಮ್’ ಕಾಯ್ದಿರಿಸಿದ ಸಂಸ್ಕೃತಿ – ಸಹಕಾರದಿಂದ ಪಾರ್ಟಿವರೆಗೂ ಎಲ್ಲೆಡೆ ಅದೇ ಆಟ! ಬೆಳಗಾವಿ:ರಾಜಕೀಯ ಬಿಸಿ ಮಾತುಗಳಿಗೆ ಹೆಸರುವಾಸಿಯಾದ ಲೋಕೋಪಯೋಗಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ರಾಜಕೀಯ ಮೈದಾನದಲ್ಲಿ ನಗೆಯ ಚಟಾಕಿ ಹಾರಿಸಿದ್ದಾರೆ.“ನಮ್ಮಲ್ಲಿ ಎಂಎಲ್‌ಎ ಮತ್ತು ಎಂಪಿ ಚುನಾವಣೆಯನ್ನು ಬಿಟ್ಟರೆ ಉಳಿದ ಎಲ್ಲ ಚುನಾವಣೆಯೂ ರೆಸಾರ್ಟ್ ರಾಜಕೀಯದ ಅರೆನಾದಲ್ಲೇ ನಡೆಯುತ್ತವೆ. ಇದು ಈಗ ಬೆಳಗಾವಿಯ ಹೊಸ ನಾರ್ಮಲ್!” ಎಂದು ಅವರು ಹೇಳಿದರು.ಮಾಧ್ಯಮದವರ…

Read More

ಜಾರಕಿಹೊಳಿ ತೆಕ್ಕೆಗೆ ಜಾರಿದ ಕಾಗೆ!

ಸಚಿವ ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆ. ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ – ಶಾಸಕ ಬಾಲಚಂದ್ರ ಜಾರಕಿಹೊಳಿ ಹುಕ್ಕೇರಿ ತಾಲೂಕಿಗೆ ಮಾತ್ರ ಸಿಮೀತವಾದ ಕತ್ತಿ ಪವರ್ ಬೆಳಗಾವಿ:ಜಾರಕಿಹೊಳಿ ಬಣದ ರಾಜಕೀಯ ಕೌಶಲ್ಯ ಮತ್ತೊಮ್ಮೆ ಬೆಳಗಿದೆ. ಜಿಲ್ಲೆಯ ಪಿಡಬ್ಲ್ಯೂಡಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಿಂದ ಕಾಗವಾಡ ಕ್ಷೇತ್ರದಲ್ಲಿ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆಯ್ಕೆಯಲ್ಲಿ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಅದೃಷ್ಟ ಒಲಿದಿದೆ.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಭಾವಿ ಶಾಸಕ…

Read More

ಶತಮಾನ ಸಂಭ್ರಮದಲ್ಲಿ RSS ಪಥ ಸಂಚಲನ

ಬೆಳಗಾವಿ:‌ಶತಮಾನೋತ್ಸವದ ಘೋಷಿತ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬೆಳಗಾವಿ ನಗರ ಘಟಕದ ಪಥಸಂಚಲನವು ಇಂದು ಸಂಜೆ ನಗರದ ಹೃದಯಭಾಗವನ್ನು ಕೇಸರಿ ಬಣ್ಣದಿಂದ ತುಂಬಿತು. ಶಿಸ್ತುಬದ್ಧ ನಡಿಗೆ, ಸದ್ದಿಲ್ಲದ ಕ್ರಮ, ಗಣವೇಷದ ಘನತೆ, ಮತ್ತು ಸಾವಿರಾರು ಸ್ವಯಂಸೇವಕರ ಹೆಜ್ಜೆಗಾಲಿನ ತಾಳ — ಎಲ್ಲವೂ ಸೇರಿ ಅದು ಕೇವಲ ಪಥಸಂಚಲನವಾಗಿರದೆ, ಸಂಘದ ನೂರು ವರ್ಷಗಳ ಶಕ್ತಿಯ ಮತ್ತು ಶ್ರದ್ಧೆಯ ಸಜೀವ ಪ್ರದರ್ಶನವಾಯಿತು. *ಇತಿಹಾಸದ ನೂರು ವರ್ಷಗಳ ನೆನಪು*1925ರಲ್ಲಿ ನಾಗಪುರದಲ್ಲಿ ಹುಟ್ಟಿದ ಆರ್‌ಎಸ್‌ಎಸ್‌ ಇಂದು ನೂರು ವರ್ಷಗಳ ಪಯಣದಲ್ಲಿ ರಾಷ್ಟ್ರಸೇವೆಯ…

Read More
error: Content is protected !!