Headlines

ದಸರಾ ಕಿಶೋರಿ ಪ್ರಶಸ್ತಿ ಪುರಸ್ಕಾರ 🌸

ದಸರಾ ಕಿಶೋರಿ ಪ್ರಶಸ್ತಿ ಪುರಸ್ಕಾರ 🌸ಬೆಳಗಾವಿಯ ಸ್ವಾತಿ ಪಾಟೀಲ್‌ಗೆ ಸಚಿವ ಸತೀಶ್‌ ಜಾರಕಿಹೊಳಿ ಸತ್ಕಾರ ಬೆಳಗಾವಿ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆದ ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಅಗ್ರ ಸ್ಥಾನ ಪಡೆದು “ದಸರಾ ಕಿಶೋರಿ” ಪ್ರಶಸ್ತಿಯನ್ನು ಗೆದ್ದ ಡಿ.ವೈ. ಸ್ಪೋರ್ಟ್ಸ್ ಹಾಸ್ಟೆಲ್ ವಿದ್ಯಾರ್ಥಿನಿ ಸ್ವಾತಿ ಪಾಟೀಲ್ ಸೇರಿದಂತೆ ವಿಜೇತರಾದ ವಿದ್ಯಾರ್ಥಿನಿಯರನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಸತ್ಕರಿಸಿದರು. ಕುವೆಂಪು ನಗರದ ಸ್ವಗೃಹದಲ್ಲಿ ನಡೆದ ಈ ಸತ್ಕಾರ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ…

Read More

ಸೋಲು ಮುಖಭಂಗವಲ್ಲ, ಹೋರಾಟ ಮುಂದುವರಿಯುತ್ತದೆ” – ಸಚಿವ ಸತೀಶ್

ಬೆಳಗಾವಿ:ಹುಕ್ಕೇರಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ, ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಎದುರು ಮೊದಲ ಬಾರಿಗೆ ಬಾಯ್ಬಿಟ್ಟರು. ಸೋಲು-ಗೆಲುವು ಪ್ರಕ್ರಿಯೆಯ ಭಾಗ, ಆದರೆ ನಮ್ಮ ಪ್ರಯತ್ನ ವ್ಯರ್ಥವಾಗಿಲ್ಲ. ಕಾರ್ಯಕರ್ತರಿಗೆ ಧೈರ್ಯ ತುಂಬಲು ನಾವು ಕಣಕ್ಕಿಳಿದಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು. ಸೋಲಿನ ಕಾರಣಗಳ ವಿಶ್ಲೇಷಣೆ “ಹೆಚ್ಚು ಮತಗಳು ಎದುರಾಳಿಗಳಿಗೆ ಬಿದ್ದವು, ಅನೇಕ ಮತಗಳು ರಿಜೆಕ್ಟ್‌ ಆದವು – ಇದು ಸೋಲಿಗೆ ಪ್ರಮುಖ ಕಾರಣ” ಎಂದು ಸತೀಶ್ ಅಭಿಪ್ರಾಯಪಟ್ಟರು. “ಕೋ-ಆಪರೇಟಿವ್ ಕ್ಷೇತ್ರ…

Read More

“ಪುನಶ್ಚೇತನ ನಮ್ಮ ಗುರಿ” – ನೂತನ ನಿರ್ದೇಶಕರ ಸಂಕಲ್ಪ

ಮಲಪ್ರಭಾ ಸಕ್ಕರೆ ಕಾರ್ಖಾನೆ: “ಪುನಶ್ಚೇತನ ನಮ್ಮ ಗುರಿ” – ನೂತನ ನಿರ್ದೇಶಕರ ಸಂಕಲ್ಪ ಎಂ.ಕೆ. ಹುಬ್ಬಳ್ಳಿ:ಬೆಳಗಾವಿ ಜಿಲ್ಲೆಯ ಹೆಮ್ಮೆಯಾದ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತೆ ಚೇತರಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ನೂತನ ಆಡಳಿತ ಮಂಡಳಿ ಮಂಗಳವಾರ ಕಾರ್ಯಾರಂಭ ಮಾಡಿತು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿಗಳು, ಪುನಶ್ಚೇತನದ ದಾರಿ ಮತ್ತು ಮುಂದಿನ ಹಂಗಾಮಿಯ ಸವಾಲುಗಳ ಕುರಿತು ಚರ್ಚೆ ನಡೆಯಿತು. ಸಭೆಯ ಆರಂಭದಲ್ಲಿ ವಿಘ್ನವಿನಾಶಕ ಶ್ರೀ ಗಣಪತಿ ಹಾಗೂ ಈ…

Read More

ಸತೀಶ್ ಬಣಕ್ಕೆ ಹುಕ್ಕೇರಿ ಶಾಕ್..!

ಸತೀಶ್ ಲೆಕ್ಕಾಚಾರ ಉಲ್ಟಾ ಆಗಿದ್ದೆಲ್ಲಿ? ಹುಕ್ಕೇರಿ ನಾಡಿಮಿಡಿತ ಅರಿತುಕೊಳ್ಳಲು ಸತೀಶ್ ಜಾರಕಿಹೊಳಿ ವಿಫಲವಾದರಾ? ಸತೀಶ್ ಜಾರಕಿಹೊಳಿಯವರಿಗೆ ವಾಸ್ತವತೆ ಬಿಟ್ಟು ತಪ್ಪು ಮಾಹಿತಿ ನೀಡಿದ್ದು ಇದಕ್ಕೆ ಕಾರಣವಾಯಿತಾ? ಕಿವಿ ಚುಚ್ಚುವವರ ಮಾತು ಕೇಳಿ ವಾಸ್ತವತೆ ಮರೆತುಬಿಟ್ಡರಾ ಸಚಿವ ಸತೀಶ್ ಜಾರಕಿಹೊಳಿ. ಬೆಳಗಾವಿ.ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಬಣ ಭರ್ಜರಿ ಜಯ ಸಾಧಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಬಣಕ್ಕೆ ದೊಡ್ಡ ಆಘಾತ ತಂದಿದೆ.ಈ ಸೋಲು ಕೇವಲ ಸಹಕಾರಿ ಕ್ಷೇತ್ರಕ್ಕೆ ಸೀಮಿತವಾಗದೇ, ಮುಂದಿನ ರಾಜಕೀಯ…

Read More

ಚನ್ನರಾಜ ಬಣಕ್ಕೆ ಭರ್ಜರಿ ಗೆಲುವು

ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಕಾರ್ಖಾನೆ ಪುನಶ್ಚೇತನ ಪೆನಾಲ್ ಗೆ ಭರ್ಜರಿ ಗೆಲುವು. 15 ಸ್ಥಾನಗಳಲ್ಲಿ 12ರಲ್ಲಿ ಗೆಲುವು ಸಾಧಿಸಿದೆ. ಇನ್ನೂ ಮೂರು ಸ್ಥಾನಗಳ ಮತ ಎಣಿಕೆ ಮುಂದುವರೆದಿದ್ದು, ಪ್ರಸ್ತುತ ಮುನ್ನಡೆ ಸಾಧಿಸಿವೆ

Read More

ಫಲಿತಾಂಶ ಕುತೂಹಲ-ಕಾರಿನಲ್ಲೇ ಕಾದು ಕುಳಿತ ಸಚಿವೆ ಹೆಬ್ಬಾಳ್ಕರ

ಬೆಳಗಾವಿ. ಎಂ.ಕೆ ಹುಬ್ಬಳ್ಳಿಯ ರಾಣಿ ಶುಗರ್ಸ ನಿರ್ದೇಶಕರ ಚುನಾವಣೆ ಮುಗಿದಿದೆ.‌ಮತ ಏಣಿಕೆ ಸಹ ಶುರುವಾಗಿದೆ. ಸಧ್ಯ ಬಂದಿರುವ ಮಾಹಿತಿ‌ ಪ್ರಕಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಪ್ಯಾನಲ್ ಬಹುಮತದಿಂದ ಆರಿಸಿ ಬರುವುದು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ. ಸಚಿವೆ ಹೆಬ್ಬಾಳಕರ ಅವರೂ ಸಹ ಮತ ಏಣಿಕೆಯ ಮುಂದೆಯೇ ಕಾರಿನಲ್ಲಿ ಕುಳಿತಿದ್ದಾರೆ. ಫಲಿತಾಂಶವು ಬಹುತೇಕವಾಗಿ‌ ಮಧ್ಯರಾತ್ರಿ ವರೆಗೆ ಬರುವ ನಿರೀಕ್ಷೆ ಇದೆ.

Read More

‘ರಾಣಿ’ ಚನ್ನರಾಜ ಕೈಗೆ ಸಿಕ್ಕರೆ..!?

ಮಲಪ್ರಭಾ ಶುಗರ್ಸ್: ಅಧಿಕಾರ ಹಟ್ಟಿಹೊಳಿ ಕೈಗೆ ಸಿಕ್ಕರೆ? ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ ಕೈಗೆ ಬಿದ್ದರೆ, ಅದು ಒಂದು ಕಾರ್ಖಾನೆಯ ಚುನಾವಣೆ ಫಲಿತಾಂಶವಲ್ಲ – ಬೆಳಗಾವಿ ರಾಜಕೀಯದಲ್ಲಿ ಹೊಸ ಸಮೀಕರಣ ಹೊಸ ಅಧ್ಯಾಯದ ಆರಂಭ. ಹೆಬ್ಬಾಳಕರ ಕುಟುಂಬದ ಬಲವರ್ಧನೆ, ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಪರೋಕ್ಷವಾಗಿ ಸವಾಲು ಎನ್ನಬಹುದು ಮತ್ತು ರೈತರ ನಿರೀಕ್ಷೆಯ ದೊಡ್ಡ ಹೊಣೆಗಾರಿಕೆ . ಇವೆಲ್ಲದರ ಪರೀಕ್ಷಾ ವೇದಿಕೆ ಇದೇ ಕಾರ್ಖಾನೆ. M K HUBLI ಯ ರಾಣಿ ಎಂದೇ ಕರೆಯಲ್ಪಡುವ ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ…

Read More

ಲೆಕ್ಕ ಕೊಡಿ, ಲೆಕ್ಕ ಕೊಡಿ”

ಹುಕ್ಕೇರಿಯಲ್ಲಿ ಗರಿಗೆದರುತ್ತಿರುವ ರಾಜಕೀಯ ಕದನ. ಕತ್ತಿ – ಜಾರಕಿಹೊಳಿ ಸಂಘರ್ಷಕ್ಕೆ ಸಹಕಾರಿ ಸಂಘದ ಚುನಾವಣೆ ವೇದಿಕೆ ಬೆಳಗಾವಿ:ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯು ಈ ಬಾರಿ ಸಾಮಾನ್ಯ ಚುನಾವಣೆ ಅಲ್ಲ.ಇದು “ಲೆಕ್ಕ ಕೊಡಿ, ಲೆಕ್ಕ ಕೊಡಿ” ಎಂಬ ರಾಜಕೀಯ ಘೋಷಣೆಯ ಅಖಾಡವಾಗಿದೆ.ಒಂದೆಡೆ ಕತ್ತಿ ಕುಟುಂಬ, ಮತ್ತೊಂದೆಡೆ ಜಾರಕಿಹೊಳಿ ಸಹೋದರರು – ಎರಡೂ ಕಡೆಯಿಂದ ಲೆಕ್ಕದ ರಾಜಕೀಯ ಜನಮನ ಸೆಳೆಯಲು ತೀವ್ರವಾಗಿ ಆಡುವ ಆಟ. *ಕತ್ತಿಯ ಸವಾಲು – “ಜಾರಕಿಹೊಳಿಯವರ ಲೆಕ್ಕವೇನು?”* ಮಾಜಿ ಸಂಸದ ರಮೇಶ ಕತ್ತಿ,…

Read More

ಬೆಳಗಾವಿ ಪಾಲಿಕೆ ಕಂದಾಯ ಭಾನಗಡಿ ಬಯಲು- ರೇಷ್ಮಾ ಎತ್ತಂಗಡಿಗೆ ಕ್ರಮ

ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ವಿರುದ್ಧ ಗಂಭೀರ ಕ್ರಮ ಶಿಫಾರಸು – ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಅಸ್ತು ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ಶಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ರಾಜ್ಯಮಟ್ಟದ ಗಮನ ಸೆಳೆಯುವ ಮಹತ್ವದ ಬೆಳವಣಿಗೆ ನಡೆದಿದೆ. ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿವೃತ್ತ ನ್ಯಾಯಾಧೀಶರಿಂದಲೇ ತನಿಖೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.ಸಭೆಯಲ್ಲಿ ಕರ್ತವ್ಯ ಲೋಪದ ಆರೋಪ ಹೊತ್ತಿರುವ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತನಿಖೆ ಪೂರ್ಣಗೊಳ್ಳುವವರೆಗೂ ಹುದ್ದೆಯಿಂದ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗಿದೆ. ತಪ್ಪಿತಸ್ಥರೆಂದು…

Read More

ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ

ಹುಕ್ಕೇರಿ ವಿದ್ಯುತ್ ಸಹಕಾರ ಸಂಘ ಚುನಾವಣಾ ಕಣ “ರೈತರೇ ನಮ್ಮ ನಿಜವಾದ ಆಸ್ತಿ – ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ” – ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘೋಡಗೇರಿ (ತಾ. ಹುಕ್ಕೇರಿ):“ವಿರೋಧಿಗಳು ಎಷ್ಟೇ ಬೈದರೂ, ಟೀಕಿಸಿದರೂ ನಾವು ಅವರಂತೆ ಬಾಯಿ ಬಿಚ್ಚಿ ಹೋರಾಡುವುದಿಲ್ಲ. ರೈತರೇ ನಮ್ಮ ನಿಜವಾದ ಆಸ್ತಿ. ನಾವು ಸೇವೆಯಿಂದಲೇ ಜನರ ವಿಶ್ವಾಸ ಗೆಲ್ಲುತ್ತೇವೆ” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಗಟ್ಟಿಯಾಗಿ ಘೋಷಿಸಿದರು. ಮಂಗಳವಾರ ರಾತ್ರಿ ಘೋಡಗೇರಿ…

Read More
error: Content is protected !!