ಚಿಕ್ಕೋಡಿಗೆ 60 ಕೋಟಿ ಅನುದಾನ ಕೊಡಿ

ಚಿಕ್ಕೋಡಿ ಕ್ಷೇತ್ರಕ್ಕೆ 60 ಕೋಟಿ ರೂ. ವಿಶೇಷ ಅನುದಾನ ನೀಡಲು ಸಿಎಂಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮನವಿ ಬೆಂಗಳೂರು: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಖ್ಯಾಗನುಗುಣವಾಗಿ ವಿದ್ಯಾರ್ಥಿಗಳು, ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಕಾಮಗಾರಿ ಕೈಗೊಳ್ಳಲು ವಿಶೇಷ ಅನುದಾನ ಮಂಜೂರು ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಮನವಿ ಸಲ್ಲಿಸಿದರು. ಬೆಂಗಳೂರಿನ ಸಿಎಂ ಗೃಹ ಕಚೇರಿಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಚರ್ಚಿಸಿದ ಸಂಸದೆ…

Read More

ತಿನಿಸು ಕಟ್ಟೆ- ಇಬ್ಬರು BJP ನಗರಸೇವಕರಿಗೆ ನೋಟೀಸ್.

ಪ್ರಾದೇಶಿಕ‌ ಆಯುಕ್ತರಿಂದ ಜಾರಿಯಾದ ನೋಟೀಸ್. ಡಿಸಿ ಮತ್ತು ಪಾಲಿಕೆ ಆಯುಕ್ತರ ಪ್ರಸ್ತಾವನೆ ಮೇರೆಗೆ ನೋಟೀಸ್ ಜಾರಿ ಮಾಡಿದ ಪ್ರಾದೇಶಿಕ ಆಯುಕ್ತರು. 22 ರಂದು ವಿಚಾರಣೆಗೆ ಹಾಜರಾಗಲು ಸೂಚನೆ‌. ಹಾಜರಾಗದಿದ್ದರೆ ಏಕಪಕ್ಷೀಯ ನಿರ್ಣಯ ಎಂದ ಪ್ರಾದೇಶಿಕ ಆಯುಕ್ತರು. ಈ ನೋಟೀಸ್ ಹಿಂದೆ ರಾಜಕೀಯ ವಾಸನೆ ಬೆಳಗಾವಿ. ಅಧಿಕಾರಿಗಳ ಮೂಲಕ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿಯ ನಗರಸೇವಕರನ್ನು ಹಣೆಯುವ ಕೆಲಸವನ್ಬು ರಾಜ್ಯ ಸರ್ಕಾರ ಮಾಡುತ್ತಿದೆಯೇ? ಬೆಳಗಾವಿಯ ತಿನಿಸು ಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು BJP ನಗರಸೇವಕರಾದ _jayant jadhav…

Read More

ಸಚಿವ ಜೋಶಿ ಬೆಳಗಾವಿಗೆ

ಬೆಳಗಾವಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಾಳೆ ದಿ.‌21 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಶಾಸಕ ಅಭಯ ಪಾಟೀಲರ ಖಾಸಗಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಮತ್ತಿತರರು‌ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಪೂರ್ವ ಸಿದ್ಧತೆಗಳೂ ಸಹ‌ ನಡೆದಿವೆ. ಬೆಳಗಾವಿ ಅನಗೋಳ‌ ನಾಕಾ ಬಳಿಯಿರುವ ಮಾಲಿನಿ ಪ್ಲಾಜಾದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Read More

ಭೂ ಬಾಡಿಗೆ ಹಗರಣ..ಆಡಿಯೋ ಹೇಳಿದ ಹತ್ತು ಸಾಕ್ಷ್ಯ..!

ಭೂ‌ ಬಾಡಿಗೆ ವಸೂಲಿ ಗುತ್ತಿಗೆ‌ ವಿಷಯದಲ್ಲಿ ಪತ್ರ‌ ಕೊಟ್ಟು ಬಿಜೆಪಿಗೆ ಮುಜುಗುರ ಉಂಟು ಮಾಡಿದರಾ ಮೇಯರ್ ? ಟೆಂಡರ್ ಇಲ್ಲದೆ ಒಂದು ತಿಂಗಳ ಮಟ್ಟಿಗೆ ಗುತ್ತಿಗೆ ನೀಡುವಲ್ಲಿ ಮೂವರ ಪಾತ್ರದ ಬಗ್ಗೆ ಸಾಕ್ಷ್ಯ ಹೇಳಿತಾ ಆ ಆಡಿಯೊ? ಬರೀ ಮೌಖಿಕ ದೂರಿನ ಮೇರೆಗೆ ಗುತ್ತಿಗೆ ಬದಲಾಯಿತಾ? ಅಥವಾ ಮತ್ತೇನಾದರೂ ಕಾರಣ ಇದೆಯಾ? ವಿಚಾರಣೆ ಮಾಡ್ತೆನಿ ಅಂದ ಬೆಳಗಾವಿ ಡಿಸಿ ಬೆಳಗಾವಿ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂ ಬಾಡಿಗೆ ವಸೂಲಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ E…

Read More

ಬೆಳಗಾವಿಯಲ್ಲಿ ಭೂ ಬಾಡಿಗೆ ವಸೂಲಾತಿ ವಿವಾದ- ಮೂಡಾ ಮೀರಿಸುತ್ತದೆ…?

ಇಂತಹವರಿಗೆ ಒಂದು ತಿಂಗಳ ಮಟ್ಟಿಗೆ ಗುತ್ತಿಗೆ ಕೊಡಿ ಎಂದು ಮೇಯರ್ ಪತ್ರ. 17 ರಂದೇ ಪತ್ರ ಕೊಟ್ಟ ಮೇಯರ್. ಮೌಖಿಕ ದೂರು ಬಂದಿತ್ತು ಎಂದ ಮೇಯರ್. 16 ರಂದೇ ಪಾಲಿಕೆ ಆಯುಕ್ತರ ಆದೇಶ. ಇ ಹರಾಜು ಇಲ್ಲದೆ ಆಯುಕ್ತರ ಆದೇಶ. ಗುತ್ತಿಗೆ ಕೊಡುವಲ್ಲಿ ನಿಯಮ ಉಲ್ಲಂಘನೆ ಮಾತು. ವಿವಾದದ ಮೇಲೆ ವಿವಾದ ಎಳೆದುಕೊಳ್ಖುತ್ತಿರುವ ಬೆಳಗಾವಿ ಪಾಲಿಕೆ ಬೆಳಗಾವಿ.ಮೈಸೂರಿನ ಮೂಡಾ ಮಾದರಿಯಲ್ಲಿಯೇ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭೂ ಬಾಡಿಗೆ ವಸೂಲಾತಿ ಗುತ್ತಿಗೆ ವಿಷಯದಲ್ಲಿ ಭಾರೀ ಪ್ರಮಾಣದ ಲೋಪ’…

Read More

ಕಾಮುಕನ ವಿರುದ್ಧ ಭುಗಿಲೆದ್ದ ಆಕ್ರೋಶ

ಮಸೀದಿ ಧ್ವನಿ ವರ್ಧಕಕ್ಕೆ ಆಕ್ಷೇಪ ಕಾಮುಕ ಯುವಕನ ಮೇಲೆ ಕಠಿಣ ಕ್ರಮಕ್ಕೆ ಪಟ್ಟು. ಪ್ರಾರ್ಥನಾ ಸ್ಥಳದಲ್ಲಿರುವ ಧ್ವನಿ ವರ್ಧಕ ಪಪ್ಪಳ ಬಗ್ಗೆನೂ ಆಕ್ಷೇಪ ಗೋ ಕಟ್ ಮಾಡಿ ಪರಿಸರ ಮಲೀನ‌ ಮಾಡುತ್ತಾರೆ.. ಬೆಳಗಾವಿ.ಕಡೋಲಿ ಗ್ರಾಮದ ಬುದ್ದಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ನಡೆಸಿದ ಎನ್ನಲಾದ ಅತ್ಯಾಚಾರ ಪ್ರಕರಣ . ಈಗ ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತೆ ಆಗುತ್ತಿದೆ. ಕಳೆದ ದಿನ ಅನ್ಯಕೋಮಿನ‌ ಯುವಕನೊಬ್ಬ ಬುದ್ದಿಮಾಂದ್ಯ ಯುವತಿಯ‌ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೂಸರು…

Read More

ಹಳ್ಳಿಗಳು ಪ್ರಗತಿ ಕಂಡರೆ ಮಾತ್ರ ದೇಶದ ಅಭಿವೃದ್ಧಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ

ಹಳ್ಳಿಗಳು ಪ್ರಗತಿ ಕಂಡರೆ ಮಾತ್ರ ದೇಶದ ಅಭಿವೃದ್ಧಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದ 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಹುಕ್ಕೇರಿ: ಹಳ್ಳಿಗಳೇ ದೇಶದ ಜೀವಾಳ. ಹೀಗಾಗಿ ಹಳ್ಳಿಗಳು ಪ್ರಗತಿ ಕಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ 10 ಕೋಟಿ ರೂಪಾಯಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ…

Read More

ಸಹಕಾರ ಯೂನಿಯನ್ ಅದ್ಯಕ್ಷರಾಗಿ ಬಸಗೌಡ ಆಯ್ಕೆ

ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ ಬಸಗೌಡ ಪಾಟೀಲ, ಉಪಾಧ್ಯಕ್ಷರಾಗಿ ಸಂಜೀವ ಸೋನಪ್ಪನವರ ಅವಿರೋಧವಾಗಿ ಆಯ್ಕೆ ಬೆಳಗಾವಿ– ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನೂತನ ಅಧ್ಯಕ್ಷರಾಗಿ ಬಸಗೌಡ ದುಂಡನಗೌಡ ಪಾಟೀಲ ಪುನರಾಯ್ಕೆಯಾದರೆ, ಉಪಾಧ್ಯಕ್ಷರಾಗಿ ಸಂಜೀವ ಸದೆಪ್ಪ ಸೋನಪ್ಪನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಗುರುವಾರದಂದು ನಡೆಯಬೇಕಿದ್ದ ಯೂನಿಯನ್ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾದ್ದರಿಂದ ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಯೂನಿಯನ್ ಪ್ರಕಟಣೆಯಲ್ಲಿ ತಿಳಿಸಿದೆ.ಕಳೆದ ದಿ….

Read More

ರಾಹುಲ್ ಗಾಂಧಿ ಕ್ಷಮೆ ಕೇಳಲಿ

ಬೆಳಗಾವಿ.ಅಗ್ನಿಪಥ ಯೋಜನೆ ಕುರಿತು ಹಗುರವಾಗಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯು ರಾಹುಲ್ ಗಾಂಧಿ ಅವರು ಸೈನಿಕರಿಗೆ ಮಾಡಿದ ಅವಮಾನ. ಆದ್ದರಿಂದ ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ ಮುಖಂಡ ಕುಮಾರ ಹಿರೇಮಠ ಆಗ್ರಹಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆಯು ಭಾರತದ ಸೈನ್ಯವನ್ನು ಬಲಪಡಿಸುವ ಹಾಗೂ ದೇಶ ಕಾಪಾಡುವ ದೇಶ ಸೇವೆಯಾಗಿದೆ. ಆದರೆ, ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್ ಗಾಂಧಿಯವರು ಈ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಪ್ರಧಾನಿ ಮೋದಿಯವರು ಭಾರತೀಯ ಸೈನ್ಯಕ್ಕೆ ಬಲ ತುಂಬುತ್ತಿದ್ದಾರೆ. ಸೈನಿಕರಿಗೆ…

Read More

ಸಂತ್ರಸ್ತೆ ಮನೆಗೆ ಜಾರಕಿಹೊಳಿ ಆಪ್ತರ ಭೆಟ್ಟಿ

ಬೆಳಗಾವಿ. ಕಳೆದ ದಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬುದ್ದಿಮಾಂದ್ಯ ಯುವತಿ‌ ಮೇಲೆ ಅತ್ಯಾಚಾರ ಪ್ರಕರಣವನ್ನು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಬೆಂಗಳೂರಿನ ಅಧಿವೇಶನದಲ್ಲಿದ್ದರೂ ಕೂಡ ತಮ್ಮ ಆಪ್ತರನ್ನು ಸಂತ್ರಸ್ತೆ ಮನೆಗೆ ಕಳಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಅಷ್ಟೇ ಅಲ್ಕ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎನ್ಬುವ ಸಚಿವರ ಸಂದೇಶವನ್ನು ಅವರ ಆಪ್ತ ಮಲಗೌಡ ಪಾಟೀಲರು ಅಧಿಕಾರಿಗಳಿಗೆ ತಿಳಿಸಿದರು.

Read More
error: Content is protected !!